ಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿ ಆಧಾರಿತ ‘ಸಂಸ್ಕಾರ’

‘ಸಂಸ್ಕಾರ’ದಲ್ಲಿ ಕೇಂದ್ರ ಸಂಕೇತವಾಗಿರುವ ಪ್ಲೇಗ್ ರೋಗ ಭಾರತದ ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಸಂಕೇತಿಸುತ್ತ, ಅದನ್ನು ನಿರ್ನಾಮಗೊಳಿಸುವ ಹೊಸದೊಂದು ಹುಟ್ಟುವುದರ ಸಂಕೇತವಾಗಿಯೂ ಬಳಕೆಯಾಗಿದೆ. ಮನುಷ್ಯನ ಬದುಕಿನ ಸಂಧಿಗ್ಧ ಸ್ಥಿತಿಯನ್ನು ಅನಾವರಣಗೊಳಿಸುತ್ತ ಪ್ರಕೃತಿ ಸ್ಪೂರ್ತಿತ ಹಾಗೂ ರೂಢಿಗತ ಸಂಪ್ರದಾಯದೊಳಗಿನ ಸಂಘರ್ಷಗಳನ್ನು, ವೈರುದ್ಯಗಳನ್ನು ಹಾಗೂ ತೀಕ್ಷ್ಣ ವೈಚಾರಿಕತೆಗಳ ಮುಖಾ-ಮುಖಿಯಾಗಿಸಲು ರಂಗಭೂಮಿಯ ಮೂಲಕ ಪ್ರೇರಿತಗೊಳಿಸುವಂತೆ ಮಾಡಲಾಗಿದೆ. ಇದು ಒಂದು ಅಗ್ರಹಾರದ ಕತೆಯಲ್ಲ, ಒಂದು ಸಮಾಜದ ಕೊಳೆಯುವಿಕೆ ಹಾಗೂ ಅಲ್ಲೇ ಹುಟ್ಟು ಪಡೆವ ಚಲನಶೀಲತೆ ಆ ಮೂಲಕ ಹೊಸದೊಂದು ಹುಟ್ಟಿನ ಸಂಕೇತಗಳನ್ನು ಮೂಡಿಸುತ್ತ ಜಾತಿ ವಿನಾಶದ ತುಡಿತಗಳ ಪಠ್ಯವಾಗಿದೆ. ಕಾಲ, ಕ್ರಿಯೆ, ಸ್ಥಳದ ಐಕ್ಯೆಗಳನ್ನು ಕಾಪಾಡಿಕೊಂಡು ನಾಟಕವಾಗಿ ರೂಪಗೊಳ್ಳಲು ಸಹಕಾರಿಯಾಗಿದೆ. ರಂಗಾಯಣವು ಸಾಮಾಜಿಕ ಪ್ರಜ್ಞೆಯ ನೆಲೆಯಿಂದ ಆಲೋಚನೆಗಳನ್ನು ರಂಗಭೂಮಿಯ ಮೂಲಕ ವಿಸ್ತರಿಸುವ ದೃಷ್ಠಿಯಿಂದ ‘ಸಂಸ್ಕಾರ’ ನಾಟಕವನ್ನು ಪ್ರಸ್ತುತ ಲೋಕಾರ್ಪಣೆಗೊಳಿಸುತ್ತಿದೆ.
ರಂಗದ ಹಿಂದೆ
ಪರಿಕರ : ಸಂತೋಷ್ಕುಮಾರ್ ಕುಸನೂರು, ಚಾಂದಿನಿ
ವಸ್ತ್ರ ವಿನ್ಯಾಸ ಸಹಾಯ : ಜಗದೀಶ ಮನವಾರ್ತೆ, ಶೃತಿ, ರಂಗಸ್ವಾಮಿ, ಕವಿತಾ
ಪ್ರಸಾದನ : ಗೀತಾ ಎಂ.ಎಸ್, ಮೀನಾಕ್ಷಿ
ಬೆಳಕು ಸಹಾಯ : ಮಹದೇವಸ್ವಾಮಿ, ವಿಶಾಲ್ ಪಾಲಪುರೆ
ಪ್ರಚಾರ : ಪ್ರಶಾಂತ್ ಹಿರೇಮಠ್, ವಿನಾಯಕ್ ಭಟ್,
ಸಂಗೀತ ವಿಭಾಗ : ಎಸ್. ರಾಮು, ಪ್ರಮೀಳಾ ಬೇಂಗ್ರೆ
ಹಿನ್ನೆಲೆ ಸಂಗೀತ : ಶ್ರೀನಿವಾಸಭಟ್
ಸಾಂಗತ್ಯ : ಶ್ರೀಕಂಠಸ್ವಾಮಿ, ಕೃಷ್ಣಚೈತನ್ಯ
ಹಾಡುಗಾರಿಕೆ : ದೇವಾನಂದ ವರಪ್ರಸಾದ್
ನೃತ್ಯ ನಿರ್ವಹಣೆ : ಮೈಮ್ ರಮೇಶ್
ರಂಗನಿರ್ವಹಣೆ : ಸರೋಜಾ ಹೆಗಡೆ
ರಂಗ ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ : ಹುಲುಗಪ್ಪ ಕಟ್ಟೀಮನಿ
ಪ್ರಸಾದನ ವಿನ್ಯಾಸ : ಮೇಕಪ್ ರಾಮಚಂದ್ರ
ಬೆಳಕಿನ ವಿನ್ಯಾಸ : ಸಗಾಯ್ರಾಜು, ಮಹೇಶ್ ಕಲ್ಲತ್ತಿ
ನೃತ್ಯ ಸಂಯೋಜನೆ : ಶ್ರೀಮತಿ ಉಮಾರಾವ್
ಹಾಡುಗಳು : ಮಂಜುನಾಥ ಬೆಳಕೆರೆ
ರಂಗರೂಪ : ಓ.ಎಲ್. ನಾಗಭೂಷಣ ಸ್ವಾಮಿ
ರಂಗರೂಪ – ಸಹ ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ಸಂಗೀತ-ನಿರ್ದೇಶನ : ಹೆಚ್. ಜನಾರ್ಧನ್ (ಜನ್ನಿ)
ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಆವರಣಕ್ಕೆ ಬೇಕಾದ ಪ್ರಕೃತಿ ಸಂಸ್ಕತಿಯ ಬಯಕೆಯಿಂದ ಈ ನಾಟಕವನ್ನು ರಂಗಾಯಣ ತನ್ನ 25ನೇ ವರ್ಷದ ಬೆಳ್ಳಿ ರಂಗಪಯಣದ ಕೊಡುಗೆಯಾಗಿ ನೀಡುತ್ತಿದೆ. ಚಲನಶೀಲ ಸಮಾಜದಲ್ಲಿ ಹೊಸ ವಿಚಾರಗಳನ್ನು ಹೊಸ ಆಶಯಗಳ ಮೂಲಕ ಮುಂದಿನ ಪರಂಪರೆಗೆ ದಿವ್ಯತೆಯನ್ನು ಬಯಸುವ ಎಲ್ಲರೂ ಈ ರಂಗಪಯಣದಲ್ಲಿ ಒಂದಾಗುತ್ತಾರೆ ಎಂಬುದು ನಮ್ಮ ನಂಬಿಕೆ.
ರಂಗದ ಮೇಲೆ
ಬೆಳ್ಳಿ, ವಿಧವೆ : ಶಶಿಕಲಾ
ವಿಧವೆ, ಅಗ್ರಹಾರದವಳು : ಶೃತಿ
ವಿಧವೆ, ಅಗ್ರಹಾರದವಳು : ಮೀನಾಕ್ಷಿ
ವಿಧವೆ, ಅಗ್ರಹಾರದವಳು : ಕವಿತಾ
ಪ್ರಾಣೇಶಾಚಾರ್ಯ : ಜಗದೀಶ ಮನವಾರ್ತೆ
ಗರುಡಾಚಾರ್ಯ : ವಿನಾಯಕ ಭಟ್ ಹಾಸಣಗಿ
ಲಕ್ಷ್ಮಣಾಚಾರ್ಯ : ನೂರ್ ಅಹ್ಮದ್ ಶೇಖ್
ದುರ್ಗಾಭಟ್ಟ : ಎಸ್. ರಾಮು
ದಾಸಾಚಾರ್ಯ, ಮಹ್ಮಮದ್ ಬ್ಯಾರಿ : ಸಂತೋಷ್ಕುಮಾರ್ ಕುಸನೂರು
ಪದ್ಮನಾಭಚಾರ್ಯ, ಮುಸ್ಲಿಂ ಭಾಂದವ : ಮಹದೇವಸ್ವಾಮಿ
ಲಕ್ಷ್ಮಿದೇವಮ್ಮ, ಸೀತಾ : ಗೀತಾ ಎಂ.ಎಸ್
ಚಂದ್ರಿ : ಸರೋಜಾ ಹೆಗಡೆ
ಮಂಜಯ್ಯ, ರಣಹದ್ದು : ಮೈಮ್ ರಮೇಶ್
ಶಂಕರಯ್ಯ, ಮುಸ್ಲಿಂ ಭಾಂದವ : ವಿಶಾಲ್ ಪಾಲಾಪುರೆ
ಊರ ಪ್ರಮುಖ, ಗೌಡ, ಮುಸ್ಲಿಂ ಭಾಂದವ : ರಂಗನಾಥ್ ವಿ.
ನಾರಣಪ್ಪ : ಹುಲುಗಪ್ಪ ಕಟ್ಟೀಮನಿ
ಶ್ರೀಪತಿ : ಕೃಷ್ಣಕುಮಾರ್ ನಾರ್ಣಕಜೆ
ಗಾಡಿ ಶೇಷಪ್ಪ, ಬ್ರಾಹ್ಮಣ : ಮಂಜುನಾಥ ಬೆಳಕೆರೆ
ಮಠದ ಗುರು, ಬ್ರಾಹ್ಮಣ, ಮಹಾಬಲ : ಮಹದೇವ
ಮಾಲೇರ ಪುಟ್ಟ : ಎಸ್. ರಾಮನಾಥ
ಪ್ರಾಣೇಶಾಚಾರ್ಯ : ಪ್ರಶಾಂತ್ ಹಿರೇಮಠ್
ಭಾಗೀರಥಿ, ಪದ್ಮಾವತಿ : ಪ್ರಮೀಳಾ ಬೇಂಗ್ರೆ